ಸಾವಿನ ಆರ್ಭಟ

ಕವಿತೆ ಸಾವಿನ ಆರ್ಭಟ ಡಾ.ಜಿ.ಪಿ.ಕುಸುಮ ನಮ್ಮಮುಂಬಯಿ ಆಸ್ಪತ್ರೆಗಳುಮತ್ತೆ ಮತ್ತೆಸಾವಿನ ಮಾರಕ ತುಳಿತಗಳನ್ನುಸದ್ದು ಗದ್ದಲವಿಲ್ಲದೆಸ್ವೀಕರಿಸುತ್ತಿವೆ.ಅಂಬುಲೆನ್ಸ್ ಗಳ ಚೀತ್ಕಾರಕ್ಕೆನಡುಗುತಿಹ ನಗರದೊಳಗೆನಿಗಿನಿಗಿ ಕೆಂಡದೊಳು ಬೇಯುವಸ್ಮಶಾನಗಳುಮೂಕವಾಗಿವೆ. ಬೆಡ್ಡುಗಳ ತೆರೆದೊಡಲಲಿಉಸಿರಿಲ್ಲದವರಲ್ಲಲ್ಲಿಹೂಡಿದ್ದಾರೆ ಡೇರೆ.ಗೋಡೆಗಳನ್ನು ಕಟ್ಟಿದವರೆಲ್ಲಕೆಡವುವ ಮುನ್ನವೇಮಣ್ಣಲ್ಲಿ ಮಣ್ಣಾಗಲೂಸಾಲಲಿ ಸರಿಯುತ ತೆರಳುತಿಹರುಸುಟ್ಟು ಸುಟ್ಟುಬೆಂಕಿಯೂ ಸೋತಿದೆ.ಸಾಲು ಕೊನೆಯಿಲ್ಲದೆ ಕೊರಗಿದೆ. ಜೀವಿತದ ಕೊನೆಯ ಕ್ರಿಯೆಕ್ರಿಯೆಯಾಗದೆಮನುಷ್ಯನು ಮನುಷ್ಯನ ಕೆಲಸಕ್ಕೆಬಾರದೆಸಂಸ್ಕೃತಿ, ಸಂಸ್ಕಾರಗಳ ಕೈ ಹಿಡಿಯಲೂಆಗದೆಹೊರಡುತ್ತವೆ ಹೃದಯಗಳುಮಾತೂ ಆಡದೆ.ಚಕಾರವೆತ್ತದೆ ಸಾಗಿದೆಆಸ್ಪತ್ರೆಯ ಹೊರಗೆ ಕಂಬನಿಯ ನದಿಒಳಗೆ ಹೆಣಗಣತಿಯ ತರಾತುರಿ. *******************************